ಪರಮಾತ್ಮನೇ ಮಹಾಗುರು
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ..ಕೆಲವರು ಹೀಗೆ ಹೇಳುವುದುಂಟು... ನನ್ನ ಅಧಿಕಾರಾವಧಿಯಲ್ಲಿ, ನನ್ನ ಆಡಳಿತಾವಧಿಯಲ್ಲಿ..ಉತ್ತಮ ಯೋಜನೆಯನ್ನು ಜಾರಿಗೆ ತಂದು ನಾನೇ ಬದಲಾವಣೆ ಮಾಡಿರುವೇ ... ಪರಿವರ್ತನೆ ತಂದಿದ್ದೇನೆ ... ಎಂದು ಸ್ವಾರ್ಥ ಅಹಂಕಾರದಿಂದಲ್ಲೇ ಹೇಳುತ್ತಾರೆ...!!! ಮಿತ್ರ ಅದು ಹಾಗೇ ಅಲ್ಲವೇ ಅಲ್ಲ...!!!
ನೋಡು ...ನೀನು ಈ ಪರಮಾತ್ಮ ಸೃಷ್ಟಿಯ ಭೂಮಿಯಲ್ಲಿ ಇರುವುದು ಅದು ನಿನ್ನ ಸಂಕಲ್ಪ, ನಿನ್ನ ಇಚ್ಛೆ ಅಲ್ಲವೇ ಅಲ್ಲ... ಸತ್ಯ..!!! ಎಲ್ಲದಕ್ಕೂ ಪರಮಾತ್ಮ ಸಂಕಲ್ಪ.. ಪ್ರೇರಣೆಯೇ ಅನ್ನುವುದು ನೆನಪಿರಲಿ...ನೀನು ಇಲ್ಲಿ ಪರಮಾತ್ಮನ ಸೇವಕ ಅಷ್ಟೇ...!!! ಪರಮಾತ್ಮನೇ ನಿನಗೆ ಸಮಾಜ,ಪ್ರಜೆಗಳ ಸೇವೆ ಮಾಡಲು ಅವಕಾಶ ಮಾಡಿರುವುದು ಎಂಬುದು ಇರಲಿ....!!! ಅವನ ಸಂಕಲ್ಪ, ಪ್ರೇರಣೆ, ಅನುಗ್ರಹ, ಕೃಪೆ ಇಲ್ಲದೇ ನಮಗೆ ಉಸಿರಾಟ ಮಾಡಲು ಕೂಡಾ ಸಾಧ್ಯನೇ...!!! ಅದೇ ಈ ಗಾಳಿ, ಈ ನೀರು, ಈ ಅನ್ನ ಅಹಾರ....!!! ಯೋಚಿಸಿ...!!??
ನಮ್ಮಿಂದ ಸೃಷ್ಟಿ ಮಾಡಲು ಸಾಧ್ಯ ಉಂಟೇ...!!! ಪರಮಾತ್ಮನ ಸಂಕಲ್ಪ ಇಲ್ಲದೇ ಒಂದು ಎಲೆ ಕೂಡಾ ಅಲುಗಾಡಲು ಸಾಧ್ಯನೇ ಇಲ್ಲ..ಈ ಬ್ರಹ್ಮಾಂಡದಲ್ಲಿ.....!!! ಇದು ಸತ್ಯ. ನಾನು, ನಾನೇಂದೇ ಅಹಂಕಾರ ಪಡಬೇಡ...ಎಲ್ಲವೂ ಪರಮಾತ್ಮನ ಸಂಕಲ್ಪದಂತೆ ನಡೆಯುವುದೆಂದು...ನಿನ್ನ ಚಂಚಲ ಮನಸ್ಸಿನ ಅರಿವಿನ ಬಂತೇ...ಅಂದಿನಿಂದಲ್ಲೇ ನೀನು ಪರಮಾತ್ಮ ಮಹಾಗುರುವಿನ ಗುಲಾಮನಾದೇ ಎಂದು ತಿಳಿ...!!!
ಮುಂದೆ ಎಲ್ಲಾ ನಿನ್ನ ಯೋಗಕ್ಷೇಮನೇ ಪರಮಾತ್ಮನೇ ಆಗಿರುವನ್ನೂ..ಇದು ಸತ್ಯ... ಮುಂದೆ ಇನ್ನಷ್ಟೂ ಎತ್ತರವನ್ನೇರುವೇ .., ಯಶಸ್ಸು ಗಳಿಸುವೇ... ಸಮಸ್ತ ಮಾನವ ಧರ್ಮದ ಗೌರವಕ್ಕೆ ಪಾತ್ರನಾಗುವೇ...!!! ನಿತ್ಯವೂ ನೀನು ಯಾವುದೇ ಚಿಂತೆ ಇಲ್ಲದೇ ಸುಖ,ಶಾಂತಿ, ನೆಮ್ಮದಿಯಿಂದಲ್ಲೇ ಇರುವುದು ಅಂತೂ ಸತ್ಯ...!!! ಅಂದ್ರೆ ಪರಮಾತ್ಮ ಮಹಾಗುರುವಿನ ಮಹಾಶಕ್ತಿ ನಿನ್ನಲ್ಲಿಯೂ ಕೂಡಾ ಜಾಗೃತವಾಗುವುದು ಸತ್ಯನೇ...!!! ಇದು ಸತ್ಯ... ಈ ಮಹಾಜಗತ್ತಿನ ಮಹಾಬದಲಾಣೆಯ ಹಿಂದಿನ ಮಹಾ ಅದ್ಭುತ ಯಶಸ್ಸು, ಜಯದ ಮಹಾಶಕ್ತಿ ಮಾತ್ರ ಪರಮಾತ್ಮ ಮಹಾಗುರು ಒಬ್ಬನೇ ಇದು ಸತ್ಯ....ನೀನು ಇಲ್ಲಿ ನಿಮಿತ್ತ ಮಾತ್ರ... ನಿನ್ನ ಕರ್ತವ್ಯ ನಿರ್ವಹಿಸು..ಅಷ್ಟೇ....!!! ನಾನೇ,ನನ್ನಿಂದಲ್ಲೇ ಆಗಿರುವುದು ಎಂದೆಂದಿಗೂ ಹೇಳುವುದೇ ಬೇಡ... ಎಲ್ಲವೂ ಪರಮಾತ್ಮ ಲಿಖಿತ....!!! ಎಂದೇ ಇರಲಿ...
ನಿನ್ನ ಬದಲಾವಣೆಯ ಜೊತೆಗೆ , ಮಹಾಜಗತ್ತಿನ ಮಾನವ ಧರ್ಮದ ಬದಲಾವಣೆಯು ಇರುತ್ತದೆ... ಇದು ಸತ್ಯ.
ಅದುವೇ ಪರಮ ಸತ್ಯ...
ಇದೇ ಸತ್ಯ, ಅದೇ ಪರಮಾತ್ಮ.
ನನ್ನ ಅನುಭವ ದೇವರು.
#god_shree_narayana_guru
#parivarthane_jagada_niyama