ಇತಿಹಾಸ ಪ್ರಸಿದ್ಧ ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ - ಶ್ರೀ ಮಹಾಗುರು ಧ್ಯಾನ ತರಗತಿ ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆ
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಭಟ್ಕಳ: ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಹಾಗೂ ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಸರಕೇರಿ ಭಟ್ಕಳ ಇದರ ಸಂಯುಕ್ತಾಶ್ರಯದಲ್ಲಿ ಇಂದು ನಡೆದ ಶ್ರೀ ಮಹಾಗುರು ಧ್ಯಾನ ತರಗತಿಯನ್ನು ಕ್ಷೇತ್ರದ ಮೊಕ್ತೆಸರರಾದ ಶ್ರೀಯುತ ಸುಬ್ರಾಯ ನಾಯ್ಕ ಮತ್ತು ನಾಮಧಾರಿ ಗುರು ಮಠ ಸಂಘದ ಅಧ್ಯಕ್ಷರಾದ ಶ್ರೀಯುತ ಸುಬ್ರಾಯ ನಾಯ್ಕರವರು ಮಹಾಗುರುಗಳಿಗೆ ದೀಪ ಬೆಳಗಿಸಿ, ಈ ವಿಶೇಷ ಆಧ್ಯಾತ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಎಸ್ .ಕೆ. ಪಾಂಡವರಕಲ್ಲು ಇವರು ಶ್ರೀ ಗುರುಗಳ ಅನುಭವ ಸಂದೇಶಗಳನ್ನು, ಮಾನಸ ಪೂಜೆ, ಗುರುಧ್ಯಾನವನ್ಬು ಗುರುಭಕ್ತರಿಗೆ ಹೇಳಿದರು. ಗುರುಗಳ ಸಂದೇಶಗಳನ್ನು ಬಹಳ ಭಕ್ತಿಯಿಂದ ಶ್ರದ್ಧೆಯಿಂದ ಕೇಳಿದರು. ಈ ಸಂದರ್ಭದಲ್ಲಿ ನಾಮಧಾರಿ ಗುರು ಮಠದ ಗೌರವ ಅಧ್ಯಕ್ಷರಾದ ಶ್ರೀಯುತ ಕೃಷ್ಣ ನಾಯ್ಕ ಮತ್ತು ಕಾರ್ಯದರ್ಶಿಗಳಾದ ಶ್ರೀಯುತ ಡಿ.ಎಲ್.ನಾಯ್ಕ, ಕ್ಷೇತ್ರದ ಸದಸ್ಯರಾದ ಕೆ ಇ.ಬಿ ಇಂಜಿನಿಯರ್ ಶ್ರೀಯುತ ಶಿವನಂದ ನಾಯ್ಕ, ಹಾಗೂ ಈ ವಿಶೇಷ ಆಧ್ಯಾತ್ಮ ಕಾರ್ಯಕ್ರಮದ ಮುಖ್ಯ ಸಂಚಾಲಕರಾದ ಶ್ರೀಯುತ ಕೃಷ್ಣ ಎಸ್ ನಾಯ್ಕ ಶಿರಾಲಿ, ಶ್ರೀಯುತ ಸತೀಶ್ ಕುಮಾರ್ ಭಟ್ಕಳ, ಕಾರ್ಯಕ್ರಮದ