ಶ್ರೀ ನಾರಾಯಣ ಗುರುಗಳ ಧರ್ಮದ ವಚನ.... ಇದು ಮಹಾಗುರುವಿನ ಸತ್ಯದ ವಚನ....ಗುರುಗಳೇ ಅಂದು ಹೇಳಿದ ನುಡಿ...ಒಬ್ಬ ಭಕ್ತನಿಗೆ. ಇದೇ ಗುರುಗಳ ಉತ್ತರ.... ಶೇಂದಿ ಇಳಿಸುವುದು ಒಂದು ಮಹಾವ್ಯಾಧಿ... ಒಂದು ಅಂಗದಲ್ಲಿ ಕುಷ್ಠರೋಗ ಹಿಡಿದರೆ ಆ ದೇಹವೆಲ್ಲ ಕೆಡುವುದು. ಅದರಂತೆ ಕೆಲವರು ಶೇಂದಿ ಇಳಿಸುವುದರಿಂದ ಸಮಾಜವೇ ಕೆಡುತ್ತಿದೆ.ರೋಗದ ಅಂಗ ಕೆಲಸಕ್ಕೆ ಬಾರದೆ ಹೋಗುತ್ತದೆ. ಅದರಂತೆ ಹೆಂಡ ಇಳಿಸುವವರನ್ನು ಸಮಾಜದಿಂದ ಬೇರ್ಪಡಿಸಬೇಕು. ಅವರೊಂದಿಗೆ ಕೂಡಿಕೊಳ್ಳಬಾರದು. ಅವರು ಹೆಂಡದ ವೃತ್ತಿ ತ್ಯಜಿಸಿದರೆ ಅವರನ್ನು ಶುದ್ಧೀಕರಿಸಿ ಸ್ವೀಕರಿಸಬಹುದು.ಇದು ಮಹಾಗುರುಗಳ ಮಾತು. ಭಕ್ತ ಮತ್ತೊಮ್ಮೆ ಪ್ರಶ್ನೆ ಮಾಡುತ್ತಾನೆ...ಗುರುಗಳಲ್ಲಿ. ಭಕ್ತ: ಜೀವನಕ್ಕೆ ಬೇರೆ ಉಪಾಯವಿಲ್ಲದೆ ಆ ಕೆಲಸಕ್ಕೆ ಹೋಗುವವರು...!? ಗುರುಗಳು ಹೇಳುತ್ತಾರೆ: ಮೂರ್ತೆ ಕತ್ತಿಯಿಂದ ನಾಲ್ಕು ಕ್ಪೌರದ ಕತ್ತಿಗಳನ್ನು ತಯಾರಿಸಿಕೊಂಡು ಉದ್ಯೋಗ ಮಾಡಿ ಜೀವಿಸುವುದು ಹೆಂಡ ಇಳಿಸುವ ಕೆಲಸಕ್ಕಿಂತ ಅಭಿಮಾನಕರವೂ ಲಾಭಕರವೂ ಆಗಿದೆ.( ಇದನ್ನು ಕೇಳಿ ಮೌನವಾಗಿದ್ದ ಭಕ್ತನೊಡನೆ ಪುನ) ಹೆಂಡ ಇಳಿಸುವ ಕೆಲಸ ಒಂದು ಮಹಾ ಪಾತಕ. ಅದು ಮೀನು ಹಿಡಿಯುವ ಕೆಲಸಕ್ಕಿಂತ ಪಾಪಕರ. ಕಳ್ಳು ತೆಗೆಯುವ ಬದಲು ಕಾಯಿ ತೆಗೆಯುವುದು ಮೇಲು, ಇದರಲ್ಲಿ ಕಷ್ಟ ಕಡಿಮೆ. ಆದರೆ ಕ್ರಮೇಣ ಗೊನೆಯನ್ನು ಬಿಟ್ಟು ಮೇಲೇರಿ ಬಿಟ್ಟಾನು, ಜೋಕೆ ....! ( ಗೊನೆ ಬಿಟ್ಟು ಕೊಂಬು ಕತ್ತರಿಸಿ ಬಿಟ್ಟಾನು") ಆಗ ಎಲ್ಲರೂ ನಕ್ಕ