ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ನವರಾತ್ರಿ ಮಹೋತ್ಸವ - ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ರೋವರ್ಸ್ ಹಾಗೂ ರೇಂಜರ್ಸ್" ಘಟಕದ ಸ್ವಯಂ ಸೇವಕರು ಪ್ರಮುಖ ಪಾತ್ರ .
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇಲ್ಲಿ ಮಂಗಳೂರು ದಸರಾ ಸಂದರ್ಭ ತಾ 20.10.2023 ರಿಂದ 24.10.2023 ರ ವರೆಗೆ ನಿರಂತರವಾಗಿ ಬೆಳಿಗ್ಗೆ 07.30 ರಿಂದ ರಾತ್ರಿ 12.30ರ ವರೆಗೆ ಶ್ರೀ ಕ್ಷೇತ್ರದಲ್ಲಿ ಸ್ವಯಂ ಸೇವಕರಾಗಿ ವಿವಿಧ ಜವಾಬ್ದಾರಿಯನ್ನು ವಹಿಸಿಕೊಂಡು ದೇವಸ್ಥಾನದ ಆವರಣದಲ್ಲಿ ತುಂಬಿದ ಭಕ್ತ ಜನ ಸಾಗರವನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಮಾತೆ ಶ್ರೀ ಶಾರದಾಂಬೆಯ ದರುಶನ ಪಡೆಯಲು ಅನುಕೂಲ ಮಾಡಿ ಕೊಡುತ್ತಾ , ದೇವಸ್ಥಾನದ ವಠಾರದಲ್ಲಿ ಅಚ್ಚುಕಟ್ಟಾದ ವಾತಾವರಣ ನಿರ್ಮಿಸುವಲ್ಲಿ "ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ರೋವರ್ಸ್ ಹಾಗೂ ರೇಂಜರ್ಸ್" ಘಟಕದ ಸ್ವಯಂ ಸೇವಕರು ಪ್ರಮುಖ ಪಾತ್ರ ವಹಿಸಿರುತ್ತಾರೆ.ಈ ಎಲ್ಲಾ ಸ್ವಯಂ ಸೇವಾ ವಿದ್ಯಾರ್ಥಿಗಳಿಗೆ ಶ್ರೀ ಶಾರದಾ ಮಾತೆಯು ವಿದ್ಯೆ, ಬುದ್ದಿ,ಆಯುಷ್ಯ,ಅರೋಗ್ಯವನ್ನು ಸದಾ ಕರುಣಿಸಲಿ ಹಾಗೂ ಶ್ರೀ ಕ್ಷೇತ್ರದಲ್ಲಿ ಇನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಈ ಸ್ವಯಂ ಸೇವಾ ವಿದ್ಯಾರ್ಥಿಗಳ ಸ್ವಯಂ ಸೇವೆ ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು... ಶ್ರೀ ನಾರಾಯಣ ಗುರುದೇವನ ಪೂರ್ಣ ಅನುಗ್ರಹ ನಿತ್ಯ ಇರಲಿ...ನಿಮಗೆ ಶುಭವಾಗಲಿ.