Posts

Showing posts from January 16, 2022

ಶ್ರೀ ಕ್ಷೇತ್ರ ಸಿಗಂದೂರು ಕ್ಷೇತ್ರದಲ್ಲಿ ಭಗವಾನ್ ಶ್ರೀ ನಾರಾಯಣ ಗುರುದೇವನಿಗೆ ಮಹತ್ವದ ಮಹಾಗೌರವ ಭಕ್ತಿಯ ಮಹಾಗುರುಪೂಜೆ....ಅದ್ಬುತ...ನಮ್ಮ ಗುರು ಪರಮ ಸುಂದರ...ಪರಮೇಶ್ವರ... ಜಗದೀಶ್ವರ... ಮಹೇಶ್ವರ....!!!!!

Image
ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಗುರುಪೂಜೆ ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನೇರವೇರಿಸಿಕೊಟ್ಟ ಪರಮಪೂಜ್ಯ ಬ್ರಹ್ಮ ಶ್ರೀ ನಾರಾಯಣ ಗುರುಗಳ ಗುರುಪೂಜೆಯು ದಿನಾಂಕ 16:01:2022 ರ ಸಂಜೆ 4:30ರಿಂದ ಶ್ರೀ ಕ್ಷೇತ್ರದ ದೇವಾಲಯದ ಶ್ರೀ ಸಿಗಂದೂರು ಚೌಡಮ್ಮ ದೇವಿಯ ಎದರುಭಾಗದ ಆವರಣದಲ್ಲಿ ನೇರವೇರಿತು. ಭಕ್ತರ ಭಜನೆ,ಮಂತ್ರಪೂಜೆ,ಅಲಂಕಾರ ಪೂಜೆ,ವಿವಿಧ ಪುಷ್ಪಾಲಂಕಾರ ಪೂಜೆ,ಪ್ರಸಾದ ನೈವೇದ್ಯ, ಮಹಾಮಂಗಳಾರತಿ,ಜಯಘೋಷಾದೊಂದಿಗೆ ವಿಜೃಂಭಣೆಯಿಂದ ದೇಶದ ಶಕ್ತಿ,ಸಂಘಟನೆ,ಧಾರ್ಮಿಕ, ದಾರ್ಶನಿಕ, ದೈವತ್ವದ ಗುರಯದೇವರ ಪಾದಾಪೂಜೆ ಶ್ರೀ ರವಿಕುಮಾರ್ ಹೆಚ್ ಆರ್ .ಪ್ರಧಾನ ಕಾರ್ಯದರ್ಶಿಗಳು. ಶ್ರೀ ಕ್ಷೇತ್ರ ಸಿಗಂದೂರು ಇವರ ಉಸ್ತುವಾರಿಯಲ್ಲಿ ಆರಾಧನಾ ಕಾರ್ಯ ನೇರವೇರಿತು. ಗುರುದೇವರಿಗೆ ವಿಶೇಷ ವಾಗಿ ಈಡಿಗ ಸಮುದಾಯದ ಅರ್ಚಕರು ಮಂತ್ರ ಪಠಣ ಮಾಡಿ ಸ್ವಾಮಿಗೆ ಪಾದಾಪೂಜೆ ಮತ್ತು ಈ ಜಾತ್ರಾ ಮಹೋತ್ಸವದ ಸಂಪೂರ್ಣ ಹೋಮ ಹವನವನ್ನು‌ ನಡೆಸಿದ್ದು ಶ್ರೀ ಕ್ಷೇತ್ರದ ವಿಶೇಷ ವಾಗಿತ್ತು. ದೇವಾಲಯದ ಗರ್ಭಗುಡಿಯ ಒಳ ಪ್ರವೇಶವನ್ನು ಪ್ರಪ್ರಥಮ ಬಾರಿಗೆ ತಮ್ಮ ಮನೆದೇವರಿಗೆ ತಾವೇ ಮಹಾಮಂಗಳಾರತಿಯನ್ನು ಮಾಡಿದ್ದು ಈ ಜಾತ್ರಾ ಮಹೋತ್ಸವದ ವಿಶೇಷ ವಾಗಿತ್ತು.ಈ ಕಾರ್ಯವನ್ನು ನೇರವೇರಲು ಮಾರ್ಗದರ್ಶನ ಮತ್ತು ಗುರು ಸಾನಿಧ್ಯವಹಿಸಿದ್ದು,  ನಮ್ಮ ಸಮುದಾಯದ ಅತ್ಯಂತ ಹಿರಿಯ ಗುರುಗಳು ದಕ್ಷಿಣದ ಅಯೋದ್ಯೆ ಎಂದೇ ಕರೆಸಿಕೊಳ್ಳುವ  ಕನ್ಯಾಡಿ ಕ್ಷೇತ್ರದ ಮಹಾಗು