ಪರಮ ಸತ್ಯ ಸದಾ ನಮ್ಮನ್ನು ಕಾಪಾಡುತ್ತದೆ....!!!

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ..
ನೀನು ಎಷ್ಟೋ ಬಾರಿ ಸ್ವಚ್ಛಗೊಳಿಸಿ, ಕ್ರಮಬದ್ಧವಾಗಿ ಮಾಡಿದ ಸೇವೆಯಾ... ಪೂಜೆನಾ... ಪೂರ್ಣವಾಗುವುದು  ಎಂದು ಅಂದುಕೊಳ್ಳಬೇಡ...!!! ನಿನ್ನ ಮನಸ್ಸಿನ ಒಳಗಿರುವಾ ...ಅಹಂ...ನಾನು...ಆಸೂಯೆ...ಪರರ ತಪ್ಪುಗಳೇ ಹೆಚ್ಚಾಗಿ ಕಾಣುವುದು...!!! ದ್ವೇಷ... ನನಗೆ ಎಲ್ಲವೂ ಗೊತ್ತು... ನಾನೇ ಎಲ್ಲವನ್ನೂ ತಿಳಿದವಾ...ಜ್ಞಾನಿ.. ನಾನು ಓದಿದಷ್ಟು..ದೇವರ ಪುಸ್ತಕ, ಶಾಸ್ತ್ರಗಳು, ಅಧ್ಯಾತ್ಮ ವಿಚಾರಗಳು ಯಾರು ಕೂಡಾ  ಓದಲು ಸಾಧ್ಯವಿಲ್ಲ... ನಾನೇ ಪ್ರತಿಯೊಂದು ವಿಷಯಗಳನ್ನು  ಬಹಳ ಸ್ಪಷ್ಟವಾಗಿ... ತಿಳಿದಿರುವೇ...!! ಎಂದು ಅಂದುಕೊಳ್ಳುವ ಬಹಳಷ್ಟು ದ್ವೇಷ ಮನಸ್ಸುಗಳು ನಿಮ್ಮ ಜೊತೆಗೆ, ಸುತ್ತ ಮುತ್ತ ಇರಬಹುದು... ಇದ್ದಾರೆ.. ಇಂತವರ ಸಹವಾಸ 
ನಿಮಗೆ ಬೇಡವೇ...ಬೇಡ...!!! ಇವರು ಹೆಚ್ಚಾಗಿ  ಸ್ವ ಪ್ರತಿಷ್ಠೆ, ವ್ಯಕ್ತಿ ಪ್ರತಿಷ್ಠೆಗಾಗಿ, ಹೆಚ್ಚಿನ ಗಮನ ಕೊಡುತ್ತಾರೆ.. ಅಷ್ಟೇ.
ದೇವರ ಮೇಲೆ ಭಕ್ತಿ ಉಂಟು... ಅದೇ ಯಾವುದು ಕೂಡಾ ಪೂರ್ಣವಿಲ್ಲ.....!!! ಇವರಲ್ಲಿ ಹೆಚ್ಚು ಸಂಶಯನೇ ಇರುವುದು...,  ಅವರು ಯಾವುದು ತಪ್ಪು ಮಾಡಿದ್ದಾರೆ... ಇವರು ಯಾವುದು ತಪ್ಪು ಮಾಡಿದ್ದಾರೆ.. ಇದರ ಲೆಕ್ಕದಲ್ಲಿಯೇ..ಹೆಚ್ಚು ಇವರ ಬದುಕು...ಕಾಲ.. ಅಷ್ಟೇ..!!!
ಆದರೆ ಇವರು ಸರಿಯಾಗಿ ಒಂದು ದಿನವು ಕೂಡಾ ಮನದಲ್ಲಿ ಶಾಂತಿಯನ್ನು, ನೆಮ್ಮದಿಯನ್ನು, ಸುಖವನ್ನು ಕಾಣಲು ಸಾಧ್ಯವಾಗಿಲ್ಲ.. ಅನ್ನುವುದು ಸತ್ಯ..!!!
ಒಬ್ಬ ಪರಮ ಸತ್ಯದ ಧರ್ಮದ ದಾರಿಯಲ್ಲಿ ಹೋಗುತ್ತಿದ್ದಾನೆ...ಎಂದರೆ ಅವನೆಂದೂ ನಾನೇ..ನನಗೆ ಎಲ್ಲವೂ ತಿಳಿದಿದೆ ಎಂದು ಹೇಳುವುದಿಲ್ಲ...ಅದರ ಬದಲಾಗಿ ಅವರು ನನ್ನ ಅನುಭವಗಳ ಜ್ಞಾನವೇ ಪರಮಾತ್ಮ ಅನ್ನುವುದು ನಿತ್ಯವೂ ಮನದಲ್ಲಿ.... ಮನಸ್ಸಿನಲ್ಲಿ ಸ್ಮರಿಸುತ್ತಾರೆ... ನೆನಪಿಸುತ್ತಾರೆ... ಪ್ರಾರ್ಥಿಸುತ್ತಾರೆ... ಇದು ಸಾವಿಪಾಲು‌ ಸತ್ಯವಾಗಿದೆ... ಜೊತೆಗೆ ಅವರೆಂದೂ ವ್ಯಯಕ್ತಿಕ ಹೆಸರು,ಪ್ರಚಾರಕ್ಕೆ ಗಮನ ಕೊಟ್ಟವರೆ ಅಲ್ಲ...ಅವರಿಗೆ ಗೊತ್ತು ಯಾರು ಏನು ಬೇಕಾದರೂ ಮಾತನಾಡಲಿ...ಹೇಳಲಿ..ಟೀಕಿಸಲಿ..ನಿಂದಿಸಲಿ..!!!
 ಸೃಷ್ಟಿಯಲ್ಲಿ ಪ್ರತಿಯೊಂದನ್ನು ನೋಡುವ ಮಹಾ ಅದ್ಬುತ ಮಹಾಶಕ್ತಿ... ದಿವ್ಯ ಶಕ್ತಿ... ಪರಂಜ್ಯೋತಿ.. ಪರಮಾತ್ಮ ಮಹಾದೇವ ಒಬ್ಬನೇ ಇರುವುದನ್ನು ಬಲವಾಗಿ ನಂಬಿದ್ದಾರೆ...!!! ಅದೇ ಕಾರಣಕ್ಕಾಗಿಯೇ ಅವರೆಂದೂ ಭಯ ಪಡುವುದಿಲ್ಲ...ಸದಾ ಜಾಗೃತೆ ವಹಿಸುತ್ತಾರೆ...!!! ಅವರೊಂದಿಗೆ ಸದಾ ಪರಂಜ್ಯೋತಿ ಪರಮಾತ್ಮನೇ ಮಹಾದೇವನೇ ಇರುವುದು ಸತ್ಯ... ಆ ಮಹಾಶಕ್ತಿಯೇ ನಿರಂತರ ಕಾಪಾಡುತ್ತದೆ... ರಕ್ಷಣೆ ಮಾಡುತ್ತದೆ... ಅವರನ್ನು... ಇದು ಸತ್ಯ ಅದುವೇ ಪರಮ ಸತ್ಯ.
ಇದೇ ಸತ್ಯ ಅದೇ ಪರಮಾತ್ಮ
ನನ್ನ ಅನುಭವ ದೇವರು
#god_shree_narayana_ಗುರು
#parivarthane_jagada_niyama

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು