15ನೇ ಶತಮಾನದ ಆರಂಭದಿಂದ ರಾಜಗದ್ದುಗೆ ಗುತ್ತಿನ ಮನೆಗಳನ್ನು ಕಳಕೊಂಡು ಶೋಷಣೆಗೆ ಒಳಗಾದ - ಬಿಲ್ಲವರು

*15ನೇ ಶತಮಾನದ ಆರಂಭದಿಂದ ರಾಜಗದ್ದುಗೆ ಗುತ್ತಿನ ಮನೆಗಳನ್ನು ಕಳಕೊಂಡು ಶೋಷಣೆಗೆ ಒಳಗಾದ ಬಿಲ್ಲವರು* 
ಕರ್ನಾಟಕ ಕರಾವಳಿಯ ಬಿಲ್ಲವರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಿ, ಮೇಲ್ಟಾತಿಯವರೆಂದು ಹೇಳಿಕೊಳ್ಳುವ ಹಿಂದೂಗಳು ಅಸಮಾನತೆಯ ಧೋರಣೆಯನ್ನು ಮಾಡುತ್ತಿದ್ದರು. ಬಿಲ್ಲವರು ಹಿಂದೂ ಧರ್ಮ ಮತ್ತು ದೇವತೆಗಳ ಬಗೆಗೆ ಅನನ್ಯ ಶ್ರದ್ಧೆಯುಳ್ಳವರಾಗಿ, ಮೇಲ್ಟಾತಿಯವರ ಮೋಸದ ಮಾತುಗಳನ್ನು ನಂಬಿ ನಡೆಯುತ್ತಿದ್ದರು. ಯಾವುದೇ ದೇವಸ್ಥಾನಗಳಲ್ಲಿ ಬಿಲ್ಲವರಿಗೆ ಪ್ರವೇಶವಿಲ್ಲದಿದ್ದರೂ ಕೂಡ ಅವರು ಆ ದೇವಸ್ಥಾನಗಳ ಹೊರ ಆವರಣದಲ್ಲಿ ನಿಂತು ಕಾಣದ ದೇವರಿಗೆ ಕೈ ಮುಗಿದು ಹರಕೆ-ಕಾಣಿಕೆಗಳನ್ನು ಕೊಂಡೊಯ್ದು ಸುರಿಯುತ್ತಿದ್ದರು. ಶತಮಾನಗಳ ಹಿಂದೆಯೇ ಕೆಲವು ಪ್ರಜ್ಞಾವಂತ ಬಿಲ್ಲವರು ಮೇಲ್ವಾತಿಯವರಿಂದ ತಮ್ಮವರಿಗೆ ಆಗುತ್ತಿರುವ ಮೋಸ, ವಂಚನೆ, ಶೋಷಣೆಗಳನ್ನು ಅರಿತು ನ್ಯಾಯಕ್ಕಾಗಿ ಹೋರಾಡುತ್ತಿದ್ದರು ಎನ್ನುವ ವಿಚಾರ ಕೋಟಿ-ಚೆನ್ನಯ, ಕಾಂತಬಾರೆ-ಬೂದಾಬಾರೆ, ಮಾಣಿಬಾಲೆ ಮುಂತಾದ ಪಾಡ್ಡನಗಳಲ್ಲಿ ಉಲ್ಲೇಖಗೊಂಡಿವೆ.

ತಮ್ಮ ಜನಾಂಗದ ಹೀನ ಗತಿಯನ್ನು ಸಹಿಸಲಾರದ ಎಂ. ಅರಸಪ್ಪನವರು 1869 ರಲ್ಲಿ ಮಂಗಳೂರಿನಲ್ಲಿ ಬಿಲ್ಲವರ ಸಭೆಯನ್ನು ಕರೆದರು. ಸುಮಾರು 5000 ಬಿಲ್ಲವ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಮೇಲ್ಮಾತಿಯ ಹಿಂದೂಗಳಿಂದ ಬಿಲ್ಲವರಿಗಾಗುವ ಅವಮಾನವನ್ನು ಅರಸಪ್ಪನವರು ವಿವರಿಸಿದರು. ತಮಗೆ ಸಮಾನ ಸ್ಥಾನವನ್ನು ಕೊಡದ ಹಿಂದೂಗಳಿಂದ ಪ್ರತ್ಯೇಕವಾದ, ಆದರೆ ಹಿಂದೂಗಳದ್ದೆ ಆದ ಬಂಗಾಳದ ಬ್ರಹ್ಮ ಸಮಾಜಕ್ಕೆ ಸೇರುವ ಬಗೆಗೆ ಆಲೋಚಿಸಿದರು. ಆದರೆ ಬಿಲ್ಲವರು ಕ್ರೈಸ್ತ ಮತವನ್ನು ಹೋಲುವ ಬ್ರಹ್ಮ ಸಮಾಜಕ್ಕೆ ಸೇರಲು ಒಪ್ಪಲಿಲ್ಲ. ಈ ಮೊದಲೇ ಅರಸಪ್ಪನವರು 1865ರಲ್ಲಿ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಬಿಲ್ಲವರಿಗೆ ಪ್ರವೇಶ ಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಯೋಜನ ಆಗಲಿಲ್ಲ. ಕದ್ರಿ ದೇವಸ್ಥಾನಕ್ಕೂ ಬಿಲ್ಲವರಿಗೂ ಪ್ರಾಚೀನ ನಂಟು. ಈ ದೇವಸ್ಥಾನದ ಬದಿಯಲ್ಲೇ ಪೂರ್ವ ದಿಕ್ಕಿನಲ್ಲಿ ಬಿಲ್ಲವರ ಮನೆ ಇದ್ದು, ಆ ಮನೆತನದವರೇ ಇಲ್ಲಿಯ ದುರ್ಗಾದೇವಿಗೆ ವಜ್ರದ ಮೂಗುತಿಯನ್ನು ಮತ್ತು ಮಂಜುನಾಥನಿಗೆ ಕಂಚಿನ ದೀಪದಾನಿಯನ್ನು ಹರಕೆಯಾಗಿ ಒಪ್ಪಿಸಿದರೆಂದು ಐತಿಹ್ಯಗಳ ಉಲ್ಲೇಖವಿದೆ. "ನಿಮ್ಮ ವಂಶದವರಿಂದಲೇ ಮಂಜುನಾಥನ ಜಾತ್ರೆಗಳ ಸಮಯದಲ್ಲಿ ಕಂಚಿನ ಹಣತೆಗಳಲ್ಲೂ ದೀಪ ಹಚ್ಚಿ ಬೆಳಗಲಿ ಎಂದು ಜೋಗಿ ಪುರುಷರು ಹರಸಿದರು ಎನ್ನಲಾಗಿದೆ. ಈ ಹೇಳಿಕೆಯ ಅನುಗುಣ ಇಂದೂ ಕೂಡ ಬಿಲ್ಲವರೇ ದೀಪದಾನಿಗೆ ಮೊದಲು ಏಳು ದೀಪದ ಬತ್ತಿಗಳನ್ನು ಹಚ್ಚುವ ಸಂಪ್ರದಾಯ ಉಳಿದು ಬಂದಿದೆ. ಈಗ ಸುಮಾರು ಎಪ್ಪತ್ತು ವರ್ಷದ ಕದ್ರಿಯ ಶೇಷ ಪೂಜಾರಿಯವರು ಈ ಸಂಪ್ರದಾಯ ನೆರವೇರಿಸುತ್ತಿದ್ದಾರೆ.

ಪಣಂಬೂರಿನ ನಂದನೇಶ್ವರ ದೇವಸ್ಥಾನದ ಪ್ರವೇಶಕ್ಕೂ 1943ರ ಸಮಯದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿಯೂ ಬಿಲ್ಲವರಿಗೆ ನ್ಯಾಯ ಸಿಗಲಿಲ್ಲ. ಬಿಲ್ಲವರಾಗಿದ್ದ ಆಳುಪ ರಾಜ ಮನೆತನದವರು 15ನೆ ಶತಮಾನದ ಆರಂಭದಿಂದ ರಾಜ ಗದ್ದುಗೆ ಮತ್ತು ಗುತ್ತಿನ ಮನೆಗಳನ್ನು ಕಳಕೊಂಡರು. ನಾನಾ ಕಾರಣಗಳಿಂದ ಬಿಲ್ಲವರು ಕ್ರಮೇಣ ಬಲಹೀನರಾಗುತ್ತ ಶೋಷಣೆಗೆ ಒಳಗಾಗಿ ಅಸ್ಪೃಶ್ಯರೆನಿಸಿಕೊಂಡರು. ಪರಿಣಾಮವಾಗಿ ಬಿಲ್ಲವರಿಗೆ ಕರಾವಳಿ ಕರ್ನಾಟಕದ ದೇವಸ್ಥಾನಗಳಲ್ಲಿ ಪ್ರವೇಶ ನಿಷಿದ್ದ ಎಂದು ಬಲಾಡ್ಯರಾದವರು ತೀರ್ಮಾನಿಸಿದರು.

''ಇಂದಿಗೆ ಸುಮಾರು 350 ವರ್ಷಗಳ ಹಿಂದೆ ಕದ್ರಿಯ ಶ್ರೀ ಮಠದ ರಾಜಪೀಠವನ್ನು ಅಲಂಕರಿಸಿದ ಅರಸರು (ನಾಥಪಂಥದ ಗುರುಪೀಠವೇರಿದವರು) ಮಂಜುನಾಥ ದೇವರ ಪೂಜೆಗಾಗಿ ಬ್ರಾಹ್ಮಣ ಅಪ್ಪಯ್ಯ ಭಟ್ಟ ಎಂಬುವರನ್ನು ನೇಮಿಸಿದರು" ಇಲ್ಲಿಂದ ಮುಂದೆ ಕದ್ರಿ ಮಂಜುನಾಥನ ಪೂಜೆ ಬ್ರಾಹ್ಮಣರಿಂದ ಶೈವಾಗಮನ ಪದ್ಧತಿಯಂತೆ ಆರಂಭವಾಯಿತು. ಕ್ರಮೇಣ ಅದು ವಂಶ ಪಾರಂಪರ್ಯವಾಯಿತು. ಬ್ರಾಹ್ಮಣ ಅರ್ಚಕರು ದೇವಸ್ಥಾನ ಬ್ರಾಹ್ಮಣರದ್ದೆಂದು ನಾಥಪಂತದ ಗುರುವಿಗೆ ಮಂಜುನಾಥನ ದೇವಸ್ಥಾನ ಪ್ರವೇಶವನ್ನು ನಿಷೇಧಿಸಿದರು. ನಾಥಪಂಥದ ಗುರು ಶ್ರೀ ಟೆಹಲನಾಥ್ ಸ್ವಾಮೀಜಿ 1914 - 1915 ಸಮಯದಲ್ಲಿ ಕೋರ್ಟಿನಲ್ಲಿ ತಮಗಾದ ನಿಷೇಧದ ಬಗೆಗೆ ವ್ಯಾಜ್ಯ ಹೂಡಿದರು. ಆ ಸಮಯದಲ್ಲಿ ಸಿವಿಲ್ ಜಡ್ಜ್ ಆಗಿದ್ದ ಬಿಲ್ಲವರಾದ ಮುಂಡಪ್ಪ ಬಂಗೇರರು ನ್ಯಾಯದಾನ ಮಾಡುವ ಮೊದಲು ದೇವಸ್ಥಾನವನ್ನು ವೀಕ್ಷಿಸಲು ಅಪೇಕ್ಷೆ ಪಟ್ಟರು. ದೇವಸ್ಥಾನದ ಕೆರೆಯಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ ಗರ್ಭಗೃಹವನ್ನು ಹೊಕ್ಕು, ವೀಕ್ಷಿಸಿ ಜೋಗಿಗಳ ಪರವಾಗಿ ತೀರ್ಪನ್ನಿತ್ತರು.

ಮುಂಡಪ್ಪನವರು ದೇವಸ್ಥಾನ ಹೊಕ್ಕಿದ್ದರಿಂದ ಅದು ಅಪವಿತ್ರವಾಯಿತೆಂದು 7-5-1916 ರವಿವಾರ ಬ್ರಹ್ಮ ಕಳಸ ಮಾಡಿ ದೇವರು ಮತ್ತು ದೇವಸ್ಥಾನವನ್ನು ಶುದ್ದೀಕರಣ ಮಾಡಿದರು. ನ್ಯಾಯಾಲಯ ಜೋಗಿಗಳ ಪರವಾಗಿ ನ್ಯಾಯ ಕೊಟ್ಟಿತು. ಆದರೆ ಬಲಾಡ್ಯರ ಎದುರು ಆ ನ್ಯಾಯವನ್ನು ದಕ್ಕಿಸಿಕೊಳ್ಳಲು ಜೋಗಿಗಳಿಗೆ ಆಗಲೇ ಇಲ್ಲ.

ನಾರಾಯಣ ಗುರುಗಳು ಶೋಷಿತ ಜನಾಂಗಕ್ಕೆ ನಾನಾ ರೂಪಗಳಿಂದ ಶಕ್ತಿಯನ್ನು ಪ್ರಧಾನ ಮಾಡುತ್ತಿದ್ದ ಕಾಲ. 1908 ಮಂಗಳೂರಿನ ಕೆಲವು ಬಿಲ್ಲವ ಪ್ರಮುಖರು ಸಭೆ ಸೇರಿ ಶ್ರೀ ನಾರಾಯಣ ಗುರು ದೇವರನ್ನು ಮಂಗಳೂರಿಗೆ ಕರೆದು ತರುವ ನಿರ್ಣಯ ಮಾಡಿದರು. ಹೊಯಿಗೆ ಬಜಾರ್ ಕೊರಗಪ್ಪ, ಶೆಡ್ಡೆ ಸೋಮಯ್ಯ ಮೇಸ್ತ್ರಿ, ಐತಪ್ಪ ಪೂಜಾರಿ, ಅಮ್ಮಣ ಮೇಸ್ತ್ರಿ, ಕಂಟ್ರಾಕ್ಟರ್ ದೂಮಪ್ಪ ಮುಂತಾದ ಬಿಲ್ಲವ ಪ್ರಮುಖರು ಕೇರಳಕ್ಕೆ ಹೋಗಿ ಗುರುದೇವರನ್ನು ಕಂಡು ಅವರನ್ನು ಮಂಗಳೂರಿಗೆ ಕರೆತರುವಲ್ಲಿ ಸಫಲರಾದರು. 1908ರಲ್ಲಿ ಗುರುಗಳು. ಮಂಗಳೂರಿಗೆ ಬಂದರು. ಅವರನ್ನು ಸಂಭ್ರಮದಿಂದ ಮಂಗಳೂರಿನಲ್ಲಿ ಸ್ವಾಗತಿಸಲಾಯಿತು. ಗುರುಗಳು ಬಿಲ್ಲವರ ಸ್ಥಿತಿಗತಿ ಗಳನ್ನು ತಿಳಿದುಕೊಂಡರು. ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಾಶಸ್ತ್ರ ಕೊಡಬೇಕೆಂದೂ, ಬಿಲ್ಲವರು ಮೂರ್ತೆಗಾರಿಕೆಯನ್ನು ಬಿಡಬೇಕೆಂದು ಹೇಳಿದರು. ಕೈಮಗ್ಗ, ಗುಡಿಕೈಗಾರಿಕೆ, ಕೃಷಿ ಮತ್ತು ವ್ಯಾಪಾರ ಮುಂತಾದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ತಿಳಿಸಿದರು. ಸಂಘಟಿತರಾಗಿ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಿರೆಂದು ಬೋಧಿಸಿದರು.

(ಆಧಾರ: ಶ್ರೀ ನಾರಾಯಣ ಗುರು ವಿಜಯ ದರ್ಶನ- ಬಾಬು ಶಿವಪೂಜಾರಿ)
ಸಂಗ್ರಹ:  ರಾಜೇಂದ್ರ ಚಿಲಿಂಬಿ

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು