Posts

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕ್ಷೇತ್ರದ ಸರ್ವಶಕ್ತಿಗಳು, ಬ್ರಹ್ಮಶ್ರೀ ನಾರಾಯಣಗುರುಗಳ ಅನುಗ್ರಹ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಆಶೀರ್ವಾದ, ಲಕ್ಷಾಂತರ ಭಕ್ತರ ಸಂಪೂರ್ಣ ಸಹಕಾರದಿಂದ ಶ್ರದ್ಧಾಭಕ್ತಿಪೂರ್ವಕವಾಗಿ ಅತ್ಯಂತ ವಿಜ್ರಂಭಣೆಯಿಂದ ನೆರವೇರುತ್ತಿದೆ. ಅಕ್ಟೋಬರ್‌ 24ರಂದು ಸಂಜೆ 4 ಗಂಟೆಯಿಂದ ಅದ್ದೂರಿ ಶೋಭಾಯಾತ್ರೆ ಜರುಗಲಿದೆ. ಇದು ನಮ್ಮ ದಸರಾ.......

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಮಂಗಳೂರು ದಸರಾ ವೈಭವ ಮತ್ತಷ್ಟು ಹೆಚ್ಚಿಸೋಣ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಕ್ಷೇತ್ರದ ಸರ್ವಶಕ್ತಿಗಳು, ಬ್ರಹ್ಮಶ್ರೀ ನಾರಾಯಣಗುರುಗಳ ಅನುಗ್ರಹ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಆಶೀರ್ವಾದ, ಲಕ್ಷಾಂತರ ಭಕ್ತರ ಸಂಪೂರ್ಣ ಸಹಕಾರದಿಂದ ಶ್ರದ್ಧಾಭಕ್ತಿಪೂರ್ವಕವಾಗಿ ಅತ್ಯಂತ ವಿಜ್ರಂಭಣೆಯಿಂದ ನೆರವೇರುತ್ತಿದೆ. ಅಕ್ಟೋಬರ್‌ 24ರಂದು ಸಂಜೆ 4 ಗಂಟೆಯಿಂದ ಅದ್ದೂರಿ ಶೋಭಾಯಾತ್ರೆ ಜರುಗಲಿದೆ. ಇದು ನಮ್ಮ ದಸರಾ. ಇಲ್ಲಿ ಯಾವುದೇ ರೀತಿಯ ಕಾನೂನುಬಾಹಿರ, ಅಹಿತಕರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡದೆ, ಇದೊಂದು ಧಾರ್ಮಿಕ, ಸಾಂಸ್ಕೃತಿಕ ಉತ್ಸವ ಎಂಬುದನ್ನು ಮನಗಂಡು, ಈ ಐತಿಹಾಸಿಕ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಮಂದಿ ಹಿರಿಯರು, ಕಿರಿಯರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ, ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಂಗಳೂರು ದಸರಾದ ವೈಭವವನ್ನು ಇನ್ನಷ್ಟು ಹೆಚ್ಚಿಸಿ, ಕ್ಷೇತ್ರದ ಹಿರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಸಹಕರಿಸೋಣ. ಶಾಂತಿ, ಸೌಹಾರ್ದ ನೆಮ್ಮದಿಯ ಸಮಾಜಕ್ಕಾಗಿ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ... ಪದ್ಮರಾಜ್ ಆರ್.  ಕೋಶಾಧಿಕಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ದೀವರ ಸಾಂಸ್ಕೃತಿಕ ವೈಭವ-2023

Image

ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಮಂಗಳೂರು ಇದರ ವತಿಯಿಂದ 2025 ರ ನೂತನ ಕ್ಯಾಲೆಂಡರ್

Image
|| *ಓಂ ಶ್ರೀ ನಾರಾಯಣ ಪರಮ ಗುರವೇ ನಮಃ* || *ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಮಂಗಳೂರು ಇದರ ವತಿಯಿಂದ 2024 ರ ನೂತನ ಕ್ಯಾಲೆಂಡರ್ ಮುದ್ರಿಸಲಾಗುವುದು ಇದರಲ್ಲಿ ವಿಶೇಷ ದಿನಗಳ ಜೊತೆಗೆ ನಮ್ಮ ದೇವಸ್ಥಾನ,* *ಸಂಘ,ಮಂದಿರ ಮತ್ತು ಗರೋಡಿ ಕ್ಷೇತ್ರ, ಗುತ್ತುಮನೆ,ಭಂಡಾರ ಮನೆಯಲ್ಲಿ ನಡೆಯುವ ವಾರ್ಷಿಕ ಮಹೋತ್ಸವ, ಆಚರಣೆಗಳ ವಿವರಗಳನ್ನು ಪ್ರಕಟಿಸಲಾಗುವುದು. ನಮಗೆ ಮಾಹಿತಿಗಳನ್ನು ಈ Google form link* https://forms.gle/VjFSngko9Kk9jNaX9 ನಲ್ಲಿ ಭರ್ತಿ ಮಾಡಿ *ದಿನಾಂಕ 31-10-2024 ರೊಳಗೆ ಕಳುಹಿಸಿರಿ.* ಹೆಚ್ಚಿನ ಮಾಹಿತಿಗಾಗಿ : 9483024279 (ಎಸ್.ಕೆ.ಪಾಂಡವರಕಲ್ಲು) ಸಂಪರ್ಕಿಸಬಹುದು. www.bsngdp.blogspot.com

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ - ಭಕ್ತ ರಿಂದ ಕರಸೇವೆ

Image
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ವಿತ್ತ ಸಚಿವ ಶ್ರೀ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಅ.15ರಿಂದ 25ರವರೆಗೆ ಜರುಗಲಿರುವ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಕರಸೇವಕ ತಂಡ, ಬೋಳಾರ ಮಾರಿಯಮ್ಮ ಕರಸೇವಾ ತಂಡ, ಶ್ರೀ ಗೋಕರ್ಣನಾಥ ಸೇವಾದಳದ ಸರ್ವ ಸದಸ್ಯರು, ಕ್ಷೇತ್ರದ ಭಕ್ತರ ವತಿಯಿಂದ ಅ.10ರಂದು ಶ್ರೀ ಕ್ಷೇತ್ರವನ್ನು ಸ್ವಚ್ಛಗೊಳಿಸಲಾಯಿತು. ಶುಚಿತ್ವ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳು. ಎಲ್ಲರಿಗೂ ಬ್ರಹ್ಮಶ್ರೀ ನಾರಾಯಣಗುರುಗಳು, ಶ್ರೀ ಗೋಕರ್ಣನಾಥ ಮತ್ತು ಪರಿವಾರ ದೇವರು ಸದಾ ಅನುಗ್ರಹ ಕರಣಿಸಲಿ....ಶುಭವಾಗಲಿ.

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಶ್ರೀಯುತ ಸೂರ್ಯಕಾಂತ್ ಜಯ ಸುವರ್ಣ

Image
*ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಶ್ರೀಯುತ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ  ಹಾರ್ದಿಕ ಅಭಿನಂದನೆಗಳು* 🌹🌹🌹 *ನಿಮ್ಮ ಮುಂದಾಳುತನದಲ್ಲಿ ಭಾರತ್ ಬ್ಯಾಂಕ್ ಇನ್ನಷ್ಟು ಮತ್ತಷ್ಟು ಪ್ರಗತಿಯ ಸಾಧನೆಗೆ ಸಾಕ್ಷಿಯಾಗಲಿ.    ವಿಶ್ವದೇವ ಭಗವಾನ್ ನಾರಾಯಣ ಗುರುದೇವರು 🙏 ಪ್ರಾಮಾಣಿಕ ಸೇವೆಯನ್ನು ಮಾಡಲು ನಿಮ್ಮ ಸಮಸ್ತ ತಂಡಕ್ಕೆ ಸದಾ ಶಕ್ತಿ ನೀಡಲಿ. ಎಂದು ನಮ್ಮ ಪ್ರಾರ್ಥನೆ. ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ

ಶ್ರೀ ಭಗವತೀ ದೇವಸ್ಥಾನ ಸಸಿಹಿತ್ಲು- ನವರಾತ್ರಿ ಮಹೋತ್ಸವ ಮತ್ತು ಹೊಸಕ್ಕಿ ನಡಾವಳಿ ಮಹೋತ್ಸವ

Image

ಸಿಗಂದೂರು ದಸರಾ ವೈಭವ 2023.ದೇವಸ್ಥಾನದಲ್ಲಿ ನಡೆಯುವ ಯಾವುದೇ ಪೂಜೆ, ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೇವಳ ಕಚೇರಿಯನ್ನು ಸಂಪರ್ಕಿಸಿ: 𝗔𝗱𝗺𝗶𝗻𝗶𝘀𝘁𝗿𝗮𝘁𝗶𝗼𝗻 𝗢𝗳𝗳𝗶𝗰𝗲 𝗦𝗖𝗗𝗧 ®#srikshetrasiganduru 094489 54052

Image
ಸಿಗಂದೂರು ದಸರಾ ವೈಭವ 2023. ದೇವಸ್ಥಾನದಲ್ಲಿ ನಡೆಯುವ ಯಾವುದೇ ಪೂಜೆ, ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೇವಳ ಕಚೇರಿಯನ್ನು ಸಂಪರ್ಕಿಸಿ:  𝗔𝗱𝗺𝗶𝗻𝗶𝘀𝘁𝗿𝗮𝘁𝗶𝗼𝗻 𝗢𝗳𝗳𝗶𝗰𝗲 𝗦𝗖𝗗𝗧 ® #shreekshetrasiganduru 094489 54052